ಸಾಮಾಜಿಕ ಕಾರ್ಯಗಳು, ರೈತ ಪರ ಕೆಲಸಗಳು ಅಂದ್ರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದಾ ಮುಂದು. ಇದೀಗ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ ಪತ್ನಿ ವಿಜಯಲಕ್ಷ್ಮಿ. ರೀಸೆಂಟಾಗಿ ಆನ್ಲೈನ್ ಆ್ಯಪ್ ಮೂಲಕ ರೈತರಿಗೆ ನೆರವಾಗಿ ನಿಂತ ವಿಜಯಲಕ್ಷ್ಮಿ ಅವರಿಗೆ ಇಂದು ದೊಡ್ಡಮಟ್ಟದ ಶ್ಲಾಘನೆ ಸಿಕ್ಕಿದೆ.
ಚಾಲೆಂಜಿಂಗ್ ಸ್ಟಾರ್ ಅಭಿನಯದ ಈ ಮಾಸ್ ಡೈಲಾಗ್ ಇವತ್ತು ಹೆಚ್ಚು ರಿಲವೆಂಟ್ ಎನಿಸುತ್ತೆ. ಯಜಮಾನ ಚಿತ್ರದ ಈ ಡೈಲಾಗ್ ಅಭಿಮಾನಿಗಳನ್ನ ರಂಜಿಸಿತ್ತು. ಆದರೆ, ಇಂದು ಇದೇ ಡೈಲಾಗ್ ಸ್ವತಃ ದಚ್ಚುಗೆ ಖುಷಿ ಕೊಟ್ಟಿದೆ. ಅದಕ್ಕೆ ಕಾರಣ ಒನ್ ಅಂಡ್ ಓನ್ಲಿ ದರ್ಶನ್ ಅವರ ಧರ್ಮಪತ್ನಿ ವಿಜಯಲಕ್ಷ್ಮಿ.
ಇ-ಕಾಮರ್ಸ್ ಜಗತ್ತಿನಲ್ಲಿ ನನ್ನ ಮೊದಲ ಉದ್ಯಮವನ್ನು ಪರಿಚಯಿಸಲು ತುಂಬಾ ಸಂತಸವಾಗಿದೆ..
ಈಗ ನಿಮಗೆ ಪರಿಚಯಿಸುತ್ತಿದ್ದೇವೆ My Fresh Basket.
ಇಂದು ಬೆಂಗಳೂರಿನಲ್ಲಿ ಪ್ರಾರಂಭವಾಗಲಿದ್ದು, ಶೀಘ್ರದಲ್ಲೇ ಹಲವು ಜಿಲ್ಲೆಗಳಲ್ಲಿ ಬರಲಿದೆ.
ಹ್ಯಾಪಿ ಶಾಪಿಂಗ್!@MyFreshBasketIN— Vijayalakshmi (@vijayaananth2) August 15, 2020
ಯಜಮಾನ ಚಿತ್ರದ ಡೈಲಾಗ್ಗೂ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೂ ಏನ್ ಸಂಬಂಧ ಅನ್ನೋದಾದ್ರೆ, ದರ್ಶನ್ ಅವರ ಧರ್ಮಪತ್ನಿ ವಿಜಯಲಕ್ಷ್ಮಿ ಮೈ ಫ್ರೆಶ್ ಬಾಸ್ಕೆಟ್ ಎಂಬ ಆನ್ಲೈನ್ ಆ್ಯಪ್ ಮಾಡುವ ಮೂಲಕ ರೈತರ ನೆರವಿಗೆ ನಿಂತಿದ್ದು ಗೊತ್ತೇಯಿದೆ. ಆ ಆ್ಯಪ್ ನ್ನ ಬಳಸಿಕೊಂಡು ರೈತರು ನೇರವಾಗಿ ತಮ್ಮ ಉತ್ಪನ್ನಗಳನ್ನ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಗ್ರಾಹಕರಿಂದ ನೇರವಾಗಿ ಹಣ ರೈತರಿಗೆ ಸಿಗುತ್ತಿತ್ತು. ಇದರಲ್ಲಿ ಯಾವುದೇ ಮಧ್ಯವರ್ತಿಗಳ ಹಾವಳಿಯಾಗಲಿ, ಉತ್ಪನ್ನಗಳ ಬಗ್ಗೆ ಯಾವುದೇ ಅನುಮಾನಗಳಾಗಲಿ ಇರಲಿಲ್ಲ. ಇಂಥಾದ್ದೊಂದು ವಿಭಿನ್ನ ಆಲೋಚನೆ ಹಾಗೂ ಆ್ಯಪ್ ಮೂಲಕ ವಿಜಯಲಕ್ಷ್ಮಿ ದರ್ಶನ್ ಅವರು ನಾಡಿನ ರೈತರ ಸಹಾಯಕ್ಕೆ ನಿಂತಿದ್ದರು.
ಇಂಥಾದ್ದೊಂದು ಬ್ರಾಂಡ್ ಹುಟ್ಟು ಹಾಕಿದ ವಿಜಯಲಕ್ಷ್ಮಿ ದರ್ಶನ್ ಅವರ ಕಾರ್ಯಕ್ಕೆ ಇಂದು ದೊಡ್ಡಮಟ್ಟದ ಶ್ಲಾಘನೆ ಸಿಕ್ಕಿದೆ. ರೈತರ ಒಳಿತಿಗಾಗಿ ಮಾಡಿದ ಅವರ ಕಾರ್ಯದಿಂದಲೇ ವಿಜಯಲಕ್ಷ್ಮಿಯವರು ನಾಡಿನ ಉದಯೋನ್ಮುಖ ಮಹಿಳಾ ಉದ್ಯಮಿ ಎನ್ನುವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ವಿಜಯಲಕ್ಷ್ಮಿಯವರು ಸದ್ದಿಲ್ಲದೇ ಮಾಡುತ್ತಿದ್ದ ಈ ಕಾರ್ಯವನ್ನ ಟೈಮ್ಸ್ ಬ್ಸುಸಿನೆಸ್ ಸಂಸ್ಥೆ ಗುರುತಿಸಿದೆ. ವಿಜಯಲಕ್ಷ್ಮಿಯವರ ಕಾರ್ಯವನ್ನ ಶ್ಲಾಘಿಸಿ ನಾಡಿನ ಉದಯೋನ್ಮುಖ ಮಹಿಳಾ ಉದ್ಯಮಿ ಪ್ರಶಸ್ತಿಯನ್ನ ನೀಡಿ ಗೌರವಿಸಿದೆ. ಈ ಗೌರವದ ಬಗ್ಗೆ ಸ್ವತಃ ವಿಜಯಲಕ್ಷ್ಮಿ ದರ್ಶನ್ ತಮ್ಮ ಟ್ವಿಟರ್ ಖಾತೆಯಲ್ಲಿ ಸಂತೋಷವನ್ನ ಹಂಚಿಕೊಂಡಿದ್ದಾರೆ.
Overjoyed on getting this award #upcoming women entrepreneur entity# Times business award @MyFreshBasketIN pic.twitter.com/sPVOW7WkOs
— Vijayalakshmi (@vijayaananth2) October 11, 2020
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂತೆಯೇ ವಿಜಯಲಕ್ಷ್ಮಿಯವರು ಕೂಡ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದಾರೆ. ದರ್ಶನ್ ಅವರಂತೆಯೇ ಅವರು ಕೂಡ ರೈತರ ಸಹಾಯಕ್ಕೆ ನಿಂತಿದ್ದಾರೆ. ಸ್ವಂತ ಬ್ರಾಂಡ್ ಕಟ್ಟುವ ಮೂಲಕ ಅನ್ನದಾತನ ಬೆನ್ನಿಗೆ ನಿಂತಿರೋದು ಖುಷಿಯ ವಿಚಾರ.