ಮಾಜಿ ಶಾಸಕರಾದ ಶ್ರೀ ಪ್ರಿಯ ಕೃಷ್ಣ ಹಾಗೂ ವಿಜಯನಗರ ವಿಧಾನಸಭಾ ಶಾಸಕರಾದ ಎಂ ಕೃಷ್ಣಪ್ಪ ಅವರ ನೇತೃತ್ವದಲ್ಲಿ ಕಾಂಗ್ರೆಸ್ ನ ಹಿರಿಯ ಮುಖಂಡ ಹೆಚ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕಾವೇರಿಪುರ ವಾರ್ಡ್ ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಓಂ ಶಕ್ತಿ ಮೆಲ್ಮರ್ವತುರ್ ದೇವಸ್ಥಾನಕ್ಕೆ ತೆರಳುವ ಮಹಿಳೆಯರಿಗೆ ಸುಮಾರು 65ಕ್ಕೂ ಹೆಚ್ಚು ಬಸ್ ಸೌಕರ್ಯವನ್ನು ಕಲ್ಪಿಸಲಾಗಿತ್ತು. ಇದೇ ಸಂದರ್ಭದಲ್ಲಿ ಮಾಜಿ ಉಪ ಮೇಯರ್ ಬಿ ಎಸ್ ಪುಟ್ಟರಾಜು, ಗೋವಿಂದರಾಜನಗರದ ಬ್ಲಾಕ್ ಅಧ್ಯಕ್ಷರಾದ ಪಿಲ್ಲಾರಾಜು, ಕಾವೇರಿಪುರ ವಾರ್ಡ್ ಅಧ್ಯಕ್ಷರಾದ ಶ್ರೀನಿವಾಸ್ ಹಾಗೂ ಸ್ಥಳೀಯ ಹಿರಿಯ ಕಾಂಗ್ರೆಸ್ ನ ಮುಖಂಡರಾದ ಉಮಾಶಂಕರ್, ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.