ರಾಮನಗರ: ಇದೊಂದು ಐತಿಹಾಸಿಕ ನಡಿಗೆ, ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮೇಕೆದಾಟು ಪಾದಯಾತ್ರೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದರ್ಶವಿಲ್ಲದೆ ಸತ್ತರೂ ಅವಮಾನ. ಹಾಗಾಗಿ, ಈ ಹೋರಾಟವನ್ನ ಹಮ್ಮಿಕೊಂಡಿದ್ದೇವೆ. ಬಿಜೆಪಿ, ಜೆಡಿಎಸ್ನವರು ಟೀಕೆ ಮಾಡ್ತಿದ್ದಾರೆ. ಅವರು ಯಾವ ಟೀಕೆ ಬೇಕಾದ್ರೂ ಮಾಡಲಿ. ನಮ್ಮಹೋರಾಟ ಮುಂದುವರಿಯಲಿದೆ.
ಇದು ನಮ್ಮಹೋರಾಟವಲ್ಲ, ಜನರ ಹೋರಾಟ. ದೆಹಲಿ ಪಾರ್ಲಿಮೆಂಟ್ ಮುಂದೆ ಧರಣಿ ಕೂರ್ತೇವೆ. ನಾವೇ ಮುಂದೆ ಗುದ್ದಲಿ ಪೂಜೆ ಮಾಡ್ತೇವೆ ಎಂದರು.
ನಟ ನೆನಪಿರಲಿ ಪ್ರೇಮ್ ಮಾತನಾಡಿ, ನಾನು ಸಾಮಾನ್ಯನಾಗಿ ಬಂದಿದ್ದೇನೆ. ಜನರ ಕುಡಿಯುವ ನೀರಿಗಾಗಿ ಬಂದಿದ್ದೇನೆ. ನಾವೆಲ್ಲರೂ ಈ ಹೋರಾಟಕ್ಕೆ ಬೆಂಬಲಿಸಬೇಕು ಎಂದರು.