ಮೈಸೂರು: ಸುಮಲತಾ ಅವರ ಹೇಳಿಕೆಯನ್ನ ಸೀರಿಯಸ್ ಆಗಿ ತಗೋಬೇಡಿ ಅವರ ಹೇಳಿಕೆ ಬಗ್ಗೆ ನನಗ್ಯಾಕೋ ನಂಬಿಕೆ ಬರ್ತಾ ಇಲ್ಲ. ಅವರು ಸಿನಿಮಾ ಜಗತ್ತಿನಿಂದ ಬಂದವರು. ಮಾಧ್ಯಮದವರ ಪ್ರಶ್ನೆಗೆ ನಾಗರಹಾವು ಸಿನಿಮಾ ಜಲೀಲ ನೆನಪಾಗಿ ಡೈಲಾಗ್ ಹೊಡೆದಿರ್ತಾರೆ. ನೀವುಗಳು ಅದನ್ನ ಸೀರಿಯಸ್ ಆಗಿ ತಗೋಬೇಡಿ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಮಂಗಳವಾರ ಹೇಳಿದ್ದಾರೆ.
ಪ್ರತಾಪ್ ಸಿಂಹ ಪೇಟೆ ರೌಡಿಗೆ ಹೋಲಿಕೆ ಮಾಡಿದ ವಿಷಯದ ಕುರಿತು ಮಾತನಾಡಿದ ಅವರು, ನಾನು ಯಾವ ಸ್ಟಾರ್ ಅಲ್ಲ. ನನಗೆ ಯಾವ ಅಭಿಮಾನಿಯೂ ಬಂದು ವೋಟು ಹಾಕೋಲ್ಲ. ನನಗೆ ನನ್ನ ಕೆಲಸವೇ ಕಾಯೋದು. ಹಾಗಾಗಿ ನನಗೆ ಕೆಲಸದ ಮೇಲೆ ನಂಬಿಕೆ ಎಂದು ಸಂಸದೆ ಸುಮಲತಾ ಅಂಬರೀಶ್ಗೆ ತಿರುಗೇಟು ನೀಡಿದ್ದಾರೆ.
ಇನ್ನು ನಾನು ಬಸವಣ್ಣನವರ ಕಾಯಕ ನಿಷ್ಠೆಯಲ್ಲಿ ನಂಬಿಕೆ ಇಟ್ಟವನು. ವ್ಯತಾ ಹೇಳಿಕೆ ಕೊಟ್ಟು ಸಮಯ ವ್ಯರ್ಥ ಮಾಡೋಲ್ಲ. ಚಪ್ಪಲಿ ಹೊಲಿಯುವನ ಮಗ ಅಮೇರಿಕಾದ ಅಧ್ಯಕ್ಷ ಆಗಿದ್ದಾರೆ. ಟೀ ಮಾರುತ್ತಿದ್ದ ಮೋದಿ ಪ್ರಧಾನಿ ಆಗಿದ್ದಾರೆ. ರಾಜಕೀಯದಲ್ಲಿ ಯಾರು ಏನು ಬೇಕಾದರೂ ಆಗಬಹುದು. ಇಲ್ಲಿ ಪಾಳೆಗಾರಿಕೆ ಸಂಸ್ಕೃತಿಗೆ ಅವಕಾಶ ಇಲ್ಲ ಎಂದರು.
10 ಪಥದ ಹೆದ್ದಾರಿ ಕಾಮಗಾರಿ ವಿಚಾರದಲ್ಲಿ ಮಂಡ್ಯ ಜನರ ಅಡ್ಡ ಹಾಕಿ ನನ್ನನ್ನ ಕೇಳಿದರು. ಆಗ ನಾನು ಅಂಡರ್ ಪಾಸ್ ಹಾಗೂ ಫ್ಲೈಓವರ್ ಮಾಡಿಸಿಕೊಡುವ ಭರವಸೆ ಕೊಟ್ಟೆ. ಇದು ಮಂಡ್ಯ ರಾಮನಗರ ಮೈಸೂರು ಜಿಲ್ಲೆಯ ಜನರು ಅನುಕೂಲ ಆಗಲಿದೆ ಅದಕ್ಕಾಗಿ ನಾನು ಭರವಸೆ ಕೊಟ್ಟೆ ವಿನಃ ಬೇರೆ ಏನು ಮಾತನಾಡಿಲ್ಲ. ಯಾವ ರಸ್ತೆ ಯಾರ ವ್ಯಾಪ್ತಿಗೆ ಬರುತ್ತೆ ಅಂತ ಕನಿಷ್ಠ ಜ್ಞಾನ ಇದ್ದರೆ ಅಪವಾದ ಹೇಳಿಕೆ ನಿಲ್ಲುತ್ತವೇ. 10 ಪಥದ ಹೆದ್ದಾರಿ ಅನುಕೂಲಕ ಮಾಡೋದು ಉದ್ದೇಶ. ಅದನ್ನ ಬಿಟ್ಟು ಬೇರೆನು ನನಗೆ ಗೊತ್ತಿಲ್ಲ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.