ಬೆಂಗಳೂರು: ಮೊನ್ನೆಮೊನ್ನೆಯಷ್ಟೇ ಪ್ರೆಸ್ಮೀಟ್ ಮಾಡಿದ್ದ ಪೊಲೀಸ್ ಆಯುಕ್ತರು ರಾಜಧಾನಿಯಲ್ಲಿ ಒಂದು ಕಾಲುಕೋಟಿ ಬೆಲೆಬಾಳುವ ಮೊಬೈಲ್ನ್ನ ಸೀಝ್ ಮಾಡಿದ್ದಾಗಿ ಹೇಳಿದರು. ಅಲ್ಲದೇ ಇದನ್ನು ರಾಬರಿ ಮಾಡಿದ್ದ ಅಫ್ಜಲ್ ಖಾನ್ ಹಾಗೂ ಆರೀಫ್ ಖಾನ್ರನ್ನ ಬಂಧಿಸಿದಾಗ ಕೂಡ ಈ ಮಾಹಿತಿಯನ್ನು ಹೇಳಿದರು. ಈ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದ ವೇಳೆ ತಾವು ಮಾಜಿ ಸಚಿವ ಜಮೀರ್ ಅಹಮದ್ ಆಪ್ತರೆಂಬ ಸ್ಫೋಟಕ ಸತ್ಯವನ್ನ ಬಾಯ್ಬಿಟ್ಟಿದ್ದಾರೆ.
ಈ ಕಳ್ಳರ ಮೇಲೆ ಜಮೀರ್ ಅಹಮದ್ರ ಕೃಪಾಕಟಾಕ್ಷ ಇದ್ದ ಕಾರಣವೋ ಏನೋ, ಇಷ್ಟ್ ದಿನ ಯಾವೊಬ್ಬ ಪೊಲೀಸರು ಇವರನ್ನು ಮುಟ್ಟೋ ಧೈರ್ಯ ಮಾಡಿರಲಿಲ್ವಂತೆ. ಆದರೆ ಜಮೀರ್ ಯಾವಾಗ ಐಎಂಎ ಕೇಸ್ನಲ್ಲಿ ಫಿಟ್ ಆದ್ರೋ ಪೊಲೀಸ್ರು ಅಫ್ಜಲ್ ಹಾಗೂ ಆರೀಪ್ರನ್ನ ಜೈಲಿಗಟ್ಟಿದ್ದಾರೆ.
ಸಮಾರಂಭವೊಂದರಲ್ಲಿ ಜಮೀರ್ ಕೈಲಿಂದಲೇ ಈ ಕಳ್ಳರು ಪ್ರಶಸ್ತಿ ಸ್ವೀಕರಿಸ್ತಾ ಇರೋ ಫೋಟೋ ಸಹ ಪೊಲೀಸರ ಕೈ ಸೇರಿದೆ. ಅದೇನೆ ಇರ್ಲಿ ಜನರನ್ನು ಕಾಯಬೇಕಾದ ರಾಜಕಾರಣಿಗಳೇ ಈ ರೀತಿ ಕಳ್ಳರನ್ನು ಪೋಷಿಸಿದ್ದು ನಿಜಕ್ಕೂ ಖಂಡನೀಯ.