ಕೊರೊನಾ ಸಮಸ್ಯೆ ಶುರುವಾದಾಗಿನಿಂದ ಚೀನಾ ಪ್ರಾಡಕ್ಟ್, ಚೀನಾ ಆ್ಯಪ್ ವಿರುದ್ಧ ದೇಶದ ಜನರು ಕಿಡಿ ಕಾರ್ತಿದ್ದಾರೆ. ಅದೇ ನಿಟ್ಟಿನಲ್ಲಿ ಟಿಕ್ಟಾಕ್ ಆ್ಯಪ್ ಬ್ಯಾನ್ ಆಗಬೇಕು ಅಂತ ಅಭಿಯಾನ ಕೂಡ ಶುರುವಾಗಿದೆ. ಇದೀಗ ಕಿರಿಕ್ ಹುಡುಗಿ ಸಂಯುಕ್ತಾ ಹೆಗ್ಡೆ ಕೂಡ ಈ ಬಗ್ಗೆ ಮಾತನಾಡಿದ್ದು, ಟಿಕ್ಟಾಕ್ ಬ್ಯಾನ್ಆಗಬಾರದು ಅಂತ ಹೇಳಿದ್ದಾರೆ. ಹಾಗಾದ್ರೆ ಸಂಯುಕ್ತ ಟಿಕ್ಟಾಕ್ ಪರವಾಗಿ ಮಾತನಾಡ್ತಿದ್ದೀರಾ(?) ಕ್ಲಾರಿಟಿ ಬೇಕು ಅಂದ್ರೆ ಈ ಸ್ಟೋರಿ ಓದಿ.
ಟಿಕ್ಟಾಕ್ ನಿಂತ್ರೂ..ಕೂತ್ರೂ ಈ ಆ್ಯಪ್ಅನ್ನ ಬಳಕೆ ಮಾಡುತ್ತಿದ್ದಾರೆ ನಮ್ಮ ಜನ. ಅದರಲ್ಲೂ ಟಿಕ್ಟಾಕ್ ಬಳಕೆದಾರರ ಪೈಕಿ ನಮ್ಮ ಭಾರತೀಯರೇ ಹೆಚ್ಚು ಅನ್ನೋದು ಹೌದು. ಆದರೆ, ಕೊರೊನಾ ಸಮಸ್ಯೆ ಶುರುವಾದಾಗಿನಿಂದ ಸ್ವ-ದೇಶಿ ಪ್ರಾಡಕ್ಟ್ಗಳನ್ನು ಬಳಸಿ, ಟಿಕ್ಟಾಕ್ ಬ್ಯಾನ್ ಮಾಡಿ ಎಂಬ ಅಭಿಯಾನ ಶುರುವಾಯ್ತು.
ಈಗಾಗಲೇ ಗೊತ್ತೀರೋ ಟಿಕ್ಟಾಕ್ ಕೂಡ ಚೀನಾದ ಒಂದು ಆದಾಯದ ಮೂಲವಾಗಿದೆ. ಹಾಗಾಗಿ ಇದಕ್ಕೆ ಕಡಿವಾಣ ಹಾಕ್ಬೇಕು ಅಂತ್ಲೇ ಬ್ಯಾನ್ ಟಿಕ್ಟಾಕ್ ಅಭಿಯಾನ ಶುರುವಾಘಿದ್ದು, ಈಗಾಗಲೇ ಸಾಕಷ್ಟು ಪರ್ಸೇಂಟ್ ಜನ ಈ ಆ್ಯಪ್ಅನ್ನ ಅನ್ಇನ್ಸ್ಟಾಲ್ ಮಾಡಿದ್ದಾರೆ ಹಾಗೂ ಸ್ಯಾಂಡಲ್ವುಡ್ನ ನಿರ್ದೇಶಕರುಗಳಾದ ಪವನ್ ಒಡೆಯರ್, ಎ.ಪಿ ಅರ್ಜುನ್, ಸಂತೋಷ್ ಆನಂದ್ರಾಮ್ ಕೂಡ ಈ ಅಭಿಯಾನಕ್ಕೆ ಸಾಥ್ ಕೊಟ್ಟಿದ್ದಾರೆ.

ಆದರೆ, ಇದೀಗ ಈ ಟೀಕ್ಟಾಕ್ ಬ್ಯಾನ್ ವಿಚಾರವಾಗಿ ಮಾತನಾಡಿರೋ ಕಿರಿಕ್ ಪಾರ್ಟಿ ಖ್ಯಾತಿಯ ನಟಿ ಸಂಯುಕ್ತಾ ಹೆಗ್ಡೆ, ಟಿಕ್ಟಾಕ್ ಬ್ಯಾನ್ ಆಗಬಾರದು ಅಂತ ಹೇಳಿದ್ದಾರೆ. ಹಾಗಂತ ನಟಿ ಸಂಯುಕ್ತ ಇಲ್ಲಿ ಟಿಕ್ಟಾಕ್ ಪರ ಮಾತನಾಡುತ್ತಿಲ್ಲ. ಟಿಕ್ಟಾಕ್ ಬ್ಯಾನ್ ಮಾಡೋದರಿಂದ ಯಾವ ಪ್ರಯೋಜನವೂ ಇಲ್ಲ. ಈ ಆ್ಯಪ್ ಇಲ್ಲ ಅಂದರೆ ಮತ್ತೊಂದು ಆ್ಯಪ್ ಮೊರೆ ಹೋಗ್ತಾರೆ ಜನ. ಹಾಗಾಗಿ ಮೊದಲು ಜನರ ಮನಸ್ಥಿತಿ ಬದಲಾಗಬೇಕು.
ಅಷ್ಟೇಅಲ್ಲ, ನಾನು ಟಿಕ್ಟಾಕ್ ಪರ ಮಾತನಾಡುತ್ತಿಲ್ಲ. ಟಿಕ್ಟಾಕ್ ಏನಾಗುತ್ತೋ ಅದಕ್ಕೂ ನನಗೂ ಸಂಬಂಧವಿಲ್ಲ. ಮೊದಲು ನಾವು ಬದಲಾಗಬೇಕು. ನಮ್ಮೊಳಗೆ ಬದಲಾವಣೆಬೇಕು ಎಂದು ನಟಿ ಸಂಯುಕ್ತ ಹೆಗ್ಡೆ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಸದ್ಯ ಈಗಾಗಲೇ ಬ್ಯಾನ್ ಟಿಕ್ಟಾಕ್ ಅಭಿಯಾನ ಶುರುವಾಗಿದ್ದು, ಸಾಕಷ್ಟು ಮಂದಿ ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಮತ್ತೊಂದು ಕಡೆ ನಟಿ ಸಂಯುಕ್ತಾ ಹೆಗ್ಡೆ ಹೇಳೋ ಮಾತಿನಲ್ಲೂ ಅರ್ಥವಿದೆ. ಅದೇನೇ ಇರ್ಲಿ ಇನ್ನು ಮುಂದಾದ್ರೂ, ನಮ್ಮ ದೇಶದ ವಸ್ತುಗಳಿಗೆ, ವಿಚಾರಗಳಿಗೆ ಪ್ರಾಮುಖ್ಯತೆ ಕೊಟ್ರೆ ಒಳೀತು ಅನ್ನಿಸುತ್ತದೆ.