ಮೈಸೂರು ಮೂಲದ ಡಿ ದಕ್ಷಿಣ್ ಕುಮಾರ್ ಅವರು ತಮ್ಮ ತಾಯಿ ಯಾವುದೇ ಪುಣ್ಯ ಕ್ಷೇತ್ರ ನೋಡಿಲ್ಲ ಎಂದು ಹೇಳಿಕೊಂಡಿದ್ದಕ್ಕೆ ತನ್ನ ಜನ್ಮದಾತೆಯನ್ನು ಸ್ಕೂಟರ್ ಮೇಲೆ ಕೂರಿಸಿಕೊಂಡು ಇಡೀ ಭಾರತವನ್ನು ತೋರಿಸಲು (ಸಂಕಲ್ಪ ಯಾತ್ರೆ) ಮುಂದಾಗಿದ್ದರು.
ಆದರೆ, ಇದೀಗ ಈ ಸಂಕಲ್ಪ ಯಾತ್ರೆಯನ್ನು ಕಥೆಯನ್ನು ಉದ್ಯಮಿ ಆನಂದ್ ಮಹೀಂದ್ರಾ ಅವರು ನೋಡಿದ್ದಾರೆ. ಸದ್ಯ ಈ ಉದ್ಯಮಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು ಕೆಲವು ಪ್ರಮುಖ ವಿಷಯಗಳಿದ್ದರೇ ಅವರು ಅದಕ್ಕೆ ತಕ್ಷಣ ಸ್ಪಂದಿಸುವ ವ್ಯಕ್ತತ್ವದವರು.
ಈ ಆಧುನಿಕ ಭರತಕುಮಾರ್ನ ವಿಷಯ ತಿಳಿದು ದಕ್ಷಿಣ್ ಮೂರ್ತಿ ಕಾರ್ಯಕ್ಕೆ ಪ್ರಶಂಸೆ ಮಾಡಿದ್ದಾರೆ. ತಾಯಿ ಬಗ್ಗೆ ಮೂರ್ತಿ ಅವರು ಹೊಂದಿರುವ ಕಾಳಜಿ, ಪ್ರೀತಿಗೆ ಮನಸೋತು. ದಕ್ಷಿಣ್ ಕುಮಾರ್ ಅವರಿಗೆ ತಮ್ಮ ಸಂಸ್ಥೆಯ ಕಾರೊಂದನ್ನು ನೀಡುವುದ್ದಾಗಿ ತಿಳಿಸಿದ್ದಾರೆ.
ಅವರು ನನ್ನನ್ನು ಸಂಪರ್ಕಿಸಲು ಸಾಧ್ಯವಾದರೇ ದಕ್ಷಿಣ್ ಕುಮಾರ್ಗೆ ನಾನು ವೈಯಕ್ತಿಕವಾಗಿ ಮಹೀಂದ್ರಾ ಸಂಸ್ಥೆಯ ಕೆಯುವಿ 100ಎನ್ಎಕ್ಸ್ಟಿ ಕಾರನ್ನು ಉಡುಗೊರೆಯಾಗಿ ನೀಡಲು ಬಯಸುತ್ತೇನೆ. ತಮ್ಮ ತಾಯಿಯೊಂದಿಗೆ ಮುಂದಿನ ಪ್ರಯಣವನ್ನು ಈ ಕಾರಿನಲ್ಲಿ ಮುಂದುವರೆಸಬಹದು ಎಂದು ಅವರು ಟ್ವೀಟರ್ನಲ್ಲಿ ತಿಳಿಸಿದ್ದಾರೆ. ಅಲ್ಲದೇ ಈ ವೀಡಿಯೋ ಹಂಚಿಕೊಂಡಿರುವ ಮನೋಜ್ ಕುಮಾರ್ ಎಂಬಾತನಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
A beautiful story. About the love for a mother but also about the love for a country… Thank you for sharing this Manoj. If you can connect him to me, I’d like to personally gift him a Mahindra KUV 100 NXT so he can drive his mother in a car on their next journey https://t.co/Pyud2iMUGY
— anand mahindra (@anandmahindra) October 23, 2019