ಚಾಮರಾಜನಗರ: ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಓಂಕಾರ ವಲಯದಲ್ಲಿ ಆನೆಯೊಂದು ರೈಲ್ವೆ ಕಂಬಿಗಳನ್ನೇ ದಾಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಓಂಕಾರ ವಲಯದಲ್ಲಿ ಆನೆಗಳು ಕಾಡಿನಿಂದ ನಾಡಿಗೆ ಬಾರದಂತೆ ರೈಲ್ವೆ ಕಂಬಿಗಳಿಂದ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಈ ತಡೆಗೋಡೆಯನ್ನು ಆನೆಯೊಂದು ದಾಟಿ ಹೋಗಿರುವ ವಿಡಿಯೋ ವೈರಲ್ ಆಗಿದೆ.
ಈ ಹಿಂದೆ ರೈಲ್ವೆ ಕಂಬಿಗಳಿಂದ ನಿರ್ಮಿಸಲಾದ ತಡೆಗೋಡೆಯನ್ನು ದಾಟಲು ಹೋಗಿ ಆನೆಯೊಂದು ಪ್ರಾಣಬಿಟ್ಟಿತ್ತು.