ಮೋದಿ ಸರ್ಕಾರ ದಾಳಿಯಿಂದ ತಮಿಳು ಸಂಸ್ಕೃತಿ ರಕ್ಷಿಸಲು ಬದ್ಧ- ರಾಹುಲ್ ಗಾಂಧಿ
ಒಂದೇ ತಿಂಗಳಲ್ಲಿಯೇ ಎರಡನೇ ಬಾರಿಗೆ ತಮಿಳುನಾಡು ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ಕುರಿತು ವಿಶೇಷ ವಿಡಿಯೊವನ್ನು ಹಂಚಿದ್ದಾರೆ

ನವದೆಹಲಿ: ರಾಷ್ಟ್ರೀಯ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಮೂರು ದಿನಗಳ ಕಾಲ ತಮಿಳುನಾಡು ಪ್ರವಾಸವನ್ನು ಇಂದಿನಿಂದ ಕೈಗೊಂಡಿದ್ದಾರೆ. ಈ ಸಂಬಂಧ ತಮ್ಮ ಅಧಿಕೃತ ಟ್ವಿಟರ್ ಖಾತೆ ಬರೆದುಕೊಂಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ದಾಳಿಯಿಂದ ತಮಿಳುನಾಡು ಸಂಸ್ಕೃತಿಯನ್ನು ರಕ್ಷಿಸಲು ಬದ್ಧರಾಗಿರುವುದಾಗಿ ತಿಳಿಸಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ತಮಿಳುನಾಡು ಭೇಟಿ ಹೆಚ್ಚಿನ ಮಹತ್ವ ಪಡೆದುಕೊಂಡಿದ್ದು. ಇತ್ತೀಚೆಗಷ್ಟೇ ತಮಿಳರ ಹೊಸ ವರ್ಷ 'ಪೊಂಗಲ್' ಹಬ್ಬದ ಪ್ರಯುಕ್ತ ನಡೆದ 'ಜಲ್ಲಿಕಟ್ಟು' ಗ್ರಾಮೀಣ ಕ್ರೀಡೆಯಲ್ಲಿ ರಾಹುಲ್ ಅವರು ಭಾಗವಹಿಸುವ ಮೂಲಕ ಗಮನ ಸೆಳೆದಿದ್ದರು.
ಸದ್ಯ ಈ ಮೂಲಕ ಒಂದೇ ತಿಂಗಳಲ್ಲಿಯೇ ಎರಡನೇ ಬಾರಿಗೆ ತಮಿಳುನಾಡು ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ಕುರಿತು ವಿಶೇಷ ವಿಡಿಯೊವನ್ನು ಹಂಚಿದ್ದಾರೆ.
ತಮಿಳುನಾಡಿಗೆ ಮತ್ತೊಮ್ಮೆ ಹಿಂತಿರುಗಲು ನನಗೆ ಸಂತಸವಾಗುತ್ತಿದೆ. ಕೊಂಗು ನಾಡಿನ ನನ್ನ ತಮಿಳು ಸಹೋದರ ಹಾಗೂ ಸಹೋದರಿಯೊಂದಿಗೆ ಸಮಯ ಕಳೆಯಲಿದ್ದೇನೆ. ನಾವೆಲ್ಲರೂ ಒಟ್ಟಾಗಿ, ನರೇಂದ್ರ ಮೋದಿ ಸರ್ಕಾರದ ದಾಳಿಯಿಂದ ತಮಿಳರ ವಿಶಿಷ್ಟ ಸಂಸ್ಕೃತಿಯನ್ನು ರಕ್ಷಿಸಲಿದ್ದೇವೆ ಎಂದು ಟ್ವಿಟ್ ಮಾಡಿದರು.
I am delighted to be back in Tamil Nadu today to spend time with my Tamilian brothers and sisters in the Kongu belt.
— Rahul Gandhi (@RahulGandhi) January 23, 2021
Together, we will defend & preserve the unique culture of the Tamils against the attacks by Modi govt. pic.twitter.com/LEl0Uxglbd