ಮನೆಯನ್ನೇ ಸುಟ್ಟವನು, ನನ್ನನ್ನ ಸುಡದೆ ಬಿಡ್ತಾರಾ - ಅಖಂಡ ಶ್ರೀನಿವಾಸ್ ಮೂರ್ತಿ
ಡಿ.ಕೆ.ಶಿವಕುಮಾರ್ ಯಾಕೆ ಅವರ ಪರ ನಿಂತಿದ್ದಾರೋ ಗೊತ್ತಿಲ್ಲ, ನೀವೇ ಅವರನ್ನ ಕೇಳಬೇಕು.

ಬೆಂಗಳೂರು: ನಮ್ಮ ಹೋರಾಟ ಮುಂದುವರಿಯಲಿದೆ. ಸಂಪತ್ ಮೇಲೆ ಕ್ರಮಕ್ಕೆ ನಾನು ಒತ್ತಡ ತಂದಿದ್ದೇವೆ. ಕೆಪಿಸಿಸಿ ಅಧ್ಯಕ್ಷರಿಗೂ ಮನವಿ ಮಾಡಿದ್ದೇವೆ. ಆದರೂ ಅಧ್ಯಕ್ಷರು ಏನೂ ಕ್ರಮ ತೆಗೆದುಕೊಂಡಿಲ್ಲ ಎಂದು ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರು ಹೇಳಿದ್ದಾರೆ.
ಮಾಜಿ ಮೇಯರ್ ಸಂಪತ್ ರಾಜ್ ಗೆ ಬೇಲ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನೊಬ್ಬ ಶಾಸಕ,ನನಗೇ ಈ ರೀತಿಯಾಗಿದೆ. ಅವರಿಗೆ ಶಿಕ್ಷೆಯಾಗಬೇಕು, ಇವತ್ತಿಗೂ ಆಗಿಲ್ಲ, ನ್ಯಾಯಾಲಯದ ಜಾಮೀನಿನ ಬಗ್ಗೆ ಮಾತನಾಡಲ್ಲ, ಅದನ್ನ ನಾನು ಒಪ್ಪುತ್ತೇನೆ. ಆದರೆ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ನಾನು ದೇವರನ್ನ ನಂಬಿದ್ದೇನೆ. ಆ ದೇವರು ಶಿಕ್ಷೆಯನ್ನ ಕೊಡಬೇಕು. ನಾನು ಹೋರಾಟ ಮುಂದುವರಿಸುತ್ತೇನೆ. ಮಾಧ್ಯಮಗಳು ನನ್ನ ಬೆಂಬಲಕ್ಕಿವೆ. ಮಾಧ್ಯಮಗಳು ನಮಗೆ ನ್ಯಾಯ ಕೊಡಿಸುವ ಭರವಸೆಯಿದೆ ಎಂದಿದ್ದಾರೆ.
ನಮ್ಮ ತಂದೆಯೂ ರಾಜಕೀಯದಲ್ಲಿದ್ದವರು. ಡಿ.ಕೆ.ಶಿವಕುಮಾರ್ ಯಾಕೆ ಅವರ ಪರ ನಿಂತಿದ್ದಾರೋ ಗೊತ್ತಿಲ್ಲ, ನೀವೇ ಅವರನ್ನ ಕೇಳಬೇಕು. ನಾನು ವಲಸೆ ಬಂದಿರಬಹುದು. ಆದರೆ, ಅತಿ ಹೆಚ್ಚಿನ ಮತಗಳಿಂದ ಗೆದ್ದವನು. ಮನೆಯನ್ನೇ ಸುಟ್ಟವನು, ನನ್ನನ್ನ ಸುಡದೆ ಬಿಡ್ತಾರಾ. ನನಗೆ ಈಗಲೂ ಥ್ರೆಟ್ ಇದೆ, ಮುಂದೆಯೂ ಇದೆ. ಮನೆ ಸುಟ್ಟುಕೊಂಡು ನಾವು ಬೀದಿಯಲ್ಲಿದ್ದೇವೆ. ಸೋನಿಯಾ ಗಾಂಧಿಯವರಿಗೆ ಪತ್ರ ಬರೆಯುತ್ತೇವೆ ಎಂದು ಹೇಳಿದ್ದಾರೆ.